ಜೇನುಕಲ್ಲು ಸಿದ್ದೇಶ್ವರ ದೇವಸ್ಥಾನ
SHREE JENUKALLU SIDDESHWARA TEMPLE,ARSIKERE
ಜೇನುಕಲ್ಲು ಸಿದ್ದೇಶ್ವರ ದೇವಸ್ಥಾನವು ಭಾರತದ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಯಾದಪುರ,ಅರಸಿಕೆರೆ ತಾಲ್ಲೂಕಿನಲ್ಲಿದೆ. ಈ ದೇವಾಲಯವು ಬಹಳ ಪ್ರಸಿದ್ಧವಾಗಿದೆ. ಪ್ರತಿ ವರ್ಷ ಈ ದೇವಸ್ಥಾನದ ಅನುಯಾಯಿಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತಿದೆ. ದೇವರು ಜೇನುಕಲ್ಲು ಸಿದ್ದೇಶ್ವರನು ಅಜ್ಜಯ್ಯಾ, ಸಿದ್ದೇಶ್ವರ ಮುಂತಾದ ಹೆಸರುಗಳಿಂದ ಪ್ರಸಿದ್ಧವಾಗಿದ್ದಾನೆ. ಜನರು ಅಗಾಧವಾದ ಭಕ್ತಿಯಿಂದ, ಈ ದೇವರ ಮೇಲೆ ನಂಬಿ ಇಟ್ಟರೆ ಭಕ್ತರನ್ನು ಖಂಡಿತಾ ಹರಸುತ್ತಾನೆ ಎನ್ನುವುದು ಜನರ ನಂಬಿಕೆ.
ಹುಣ್ಣಿಮೆ ಹಾಗೂ ಅಮವಾಸ್ಯೆಯಂದು ಭಕ್ತರು ದಂಡು
ಪ್ರತಿ ತಿಂಗಳು ಹುಣ್ಣಿಮೆ ಹಾಗೂ ಅಮವಾಸ್ಯೆಯಂದು ಈ ಮಂದಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿಭಕ್ತರು ಆಗಮಿಸುತ್ತಾರೆ . ಈ ವಿಶೇಷ ದಿನದಂದು ಸಿದ್ದೇಶ್ವರನ ದರ್ಶನ ಪಡೆದ್ರೆ ನಿಮ್ಮ ಇಚ್ಛೆಗಳೆಲ್ಲಾ ಈಡೇರುತ್ತವಂತೆ. 1101 ಮೆಟ್ಟಿಲುಗಳನ್ನು ಹತ್ತಿ ಇಲ್ಲಿನ ಬೆಟ್ಟ ಹತ್ತಿದರೆ ನೀವು ಸಿದ್ದೇಶ್ವರನ ಎರಡು ಪಾದದ ಗುರುತಿನ ದರ್ಶನ ಪಡೆಯಬಹುದು.
ದಂತ ಕಥೆಯ ಪ್ರಕಾರ
ಹಿಂದೆ ಈ ಪ್ರಾಂತ್ಯ ಮೊದಲು ಅರಣ್ಯವಾಗಿತ್ತು. ಸಿದ್ಧರು ಅನೇಕ ವರ್ಷ ತಪಸ್ಸು ಮಾಡಿ ಸಿದ್ದಿಯಾದ ಸ್ಥಳವೇ ಯಾದಪುರವಾಯಿತೆಂದು ಪ್ರಚಲಿತದಲ್ಲಿ ಇದೆ. ಒಂದು ದಂತಕಥೆಯ ಪ್ರಕಾರ, ಒಮ್ಮೆ ಒಬ್ಬ ಸನ್ಯಾಸಿಯು ಈ ಹಳ್ಳಿಯ ಮೂಲಕ ಹಾದು ಹೋಗುತ್ತಿದ್ದಾಗ ಓರ್ವ ಮಹಿಳೆಯು ತನ್ನ ಮಗುವನ್ನು ಕಳೆದುಕೊಂಡು ದುಃಖಿಸುತ್ತಿರುತ್ತಾಳೆ. ಆಕೆಯ ಮಗುವಿನ ಸಾವಿಗೆ ಕಾರಣ ತಿಳಿದಾಗ ಗ್ರಾಮಸ್ಥರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಯುತ್ತದೆ. ಅದನ್ನು ತೊಡೆದುಹಾಕಲು ಸನ್ಯಾಸಿಯು ಸಿದ್ದೇಶ್ವರನನ್ನು ಕುರಿತು ತಪಸ್ಸು ಮಾಡಿ ಜೇನುಕಲ್ಲು ಸಿದ್ಧೇಶ್ವರನನ್ನು (ಶಿವ) ಮೆಚ್ಚಿಸಲು ಸಾಧ್ಯವಾಗುತ್ತದೆ. ಆ ಊರಿನಲ್ಲಿರುವ ಆರೋಗ್ಯದ ಸಮಸ್ಯೆಗಳನ್ನು ತೊಡೆದುಹಾಕುವ ವರವನ್ನು ಕೇಳುತ್ತಾರೆ. ಹೀಗಾಗಿ, ವಿವಿಧ ರೋಗಗಳಿಂದ ಬಳಲುತ್ತಿರುವ ಜನರು ಈ ಸ್ಥಳಕ್ಕೆ ಬಂದರೆ ಗುಣಮುಖರಾಗುತ್ತಾರಂತೆ.
ಜೇನು ಕಲ್ಲು ಹೆಸರು ಬಂದಿದ್ದು ಹೇಗೆ?
ಹಿಂದೆ ಎತ್ತರವಾದ ಬೆಟ್ಟದಲ್ಲಿ ಶ್ರೀಯವರ ಸನ್ನಿಧಾನದ ಪಕ್ಕದಲ್ಲಿ ಜೇನುಗೂಡು ಸದಾಕಾಲ ಕಟ್ಟಿರುವುದರಿಂದ ಈ ಕ್ಷೇತ್ರಕ್ಕೆ ಜೇನುಕಲ್ ಸಿದ್ದೇಶ್ವರ ಸ್ವಾಮಿಯವರ ಕ್ಷೇತ್ರವೆಂದು ಹೆಸರು ಬಂದಿದೆ. ದೇವತೆಗಳು ಜೇನು ಹುಳುಗಳ ರೂಪದಲ್ಲಿ ಪ್ರತಿಯೊಬ್ಬರನ್ನು ನೋಡುತ್ತಿದ್ದಾರೆ. ಒಂದು ವೇಳೆ ಈ ಕ್ಷೇತ್ರಕ್ಕೆ ಬರುವ ಭಕ್ತರು ಅಪವಿತ್ರವಾಗಿ ಬಂದರೆ ಜೇನುಗೂಡುಗಳು ಎದ್ದು ತೊಂದರೆ ಕೊಡುತ್ತವೆ ಎನ್ನುವುದು ಜನರ ನಂಬಿಕೆ.
ಭಕ್ತರಿಗಾಗಿ ವಿಶೇಷ ಬಸ್ ಸೌಲಭ್ಯ
ಯಾದಪುರವು ಅರಸಿಕೆರೆಯಿಂದ 6 ಕಿ.ಮೀ ದೂರದಲ್ಲಿದೆ. ಇಲ್ಲಿ ನೀವು ಸರ್ಕಾರಿ ಬಸ್ಸುಗಳು ಅಥವಾ ಆಟೋಗಳ ಮೂಲಕ ತಲುಪಬಹುದು. ಹುಣ್ಣಿಮೆ ಅಥವಾ ಅಮವಾಸ್ಯೆಯ ಸಂದರ್ಭದಲ್ಲಿ, ಇಲ್ಲಿಗೆ ಬರುವ ಭಕ್ತರಿಗಾಗಿ ವಿಶೇಷ ಸರ್ಕಾರಿ ಬಸ್ಗಳನ್ನು ಅಳವಡಿಸಲಾಗುತ್ತದೆ. 3 ಹುಣ್ಣಿಮೆಗೆ ಈ ಕ್ಷೇತ್ರಕ್ಕೆ ಬಂದು ಹರಕೆ ಮಾಡಿಕೊಂಡು ಹೋದರೆ ಅವರ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ. ಹೀಗಾಗಿ ಪ್ರತಿ ಹುಣ್ಣಿಮೆ ಹಾಗೂ ಚೈತ್ರಮಾಸದಲ್ಲಿ ನಡೆಯುವ ಗುರುವಿನ ವೈಭವದ ಜಾತ್ರೆಗೆ ಅಸಂಖ್ಯಾ ಭಕ್ತ ಸಮೂಹವೇ ಇಲ್ಲಿ ಸೇರುತ್ತದೆ.
ಸಿದ್ದೇಶ್ವರ ಉತ್ಸವ
ಪ್ರತಿ ವರ್ಷ ಪ್ರಸಿದ್ಧವಾದ ಶ್ರೀ ಜೇನುಕಲ್ಲು ಸಿದ್ದೇಶ್ವರ ಉತ್ಸವವನ್ನು ಏಪ್ರಿಲ್ / ಜೂನ್ ತಿಂಗಳಲ್ಲಿ ನಡೆಸಲಾಗುತ್ತದೆ. ಉತ್ಸವದ ಸಂದರ್ಭದಲ್ಲಿ ನಡೆಯುವ ರಥೋತ್ಸವ, ಆರತಿ ಪೂಜೆ ಮತ್ತು ಕೆಂಡಾ ತುಳಿತಗಳನ್ನು ನೋಡಿ, ಉತ್ಸವದಲ್ಲಿ ಭಾಗವಹಿಸಿ ಆಶೀರ್ವಾದ ಪಡೆದರೆ ನಮ್ಮ ಎಲ್ಲಾ ಪಾಪಗಳು ದೂರವಾಗುತ್ತವಂತೆ.
ಪ್ರತಿದಿನ ಅನ್ನ ಪ್ರಸಾದ
ಅಜ್ಜಯ ದರ್ಶನಕ್ಕೆ ಬರುವ ಭಕ್ತರಿಗೆ ಪ್ರತಿದಿನ ಅನ್ನ ಪ್ರಸಾದವನ್ನು ನೀಡಲಾಗುತ್ತದೆ. ಮತ್ತು ಆಹಾರವನ್ನು ವ್ಯರ್ಥ ಮಾಡದಿರುವ ಸುಂದರವಾದ ಸಂದೇಶವನ್ನು ಸಾರಲಾಗುತ್ತದೆ. ಇಲ್ಲಿ ದೇವರಿಗೆ ಬಹಳಷ್ಟು ಸೇವೆಗಳನ್ನು ನೀಡಲಾಗುತ್ತದೆ. ಈ ಸೇವೆಗಳ ಬಗ್ಗೆ ನೀವು ಪುರೋಹಿತರಲ್ಲಿ ಕೇಳಿ ತಿಳಿದುಕೊಂಡು ಮತ್ತು ಅರ್ಚನೆ, ಸೇವೆಗಳನ್ನು ಮಾಡಿಸಿಕೊಳ್ಳಬಹುದು.
1101 ಮೆಟ್ಟಿಲು
ಈ ಬೆಟ್ಟದ ತುದಿಯಲ್ಲಿ ಒಂದು ಗೋಪೂರವನ್ನು ನೀವು ನೋಡಬಹುದು. 1101 ಮೆಟ್ಟಿಲು ಹತ್ತಿ ಬೆಟ್ಟ ಹತ್ತಿದರೆ ಇಲ್ಲಿ ನೀವು ಸಿದ್ದೇಶ್ವರ ಸ್ವಾಮಿಯ ಪಾದದ ಗುರುತನ್ನು ನೋಡಬಹುದು. ಅಲ್ಲೇ ಪಕ್ಕದಲ್ಲಿ ಗಂಗಮ್ಮ ಕೊಳ ಇದೆ. ಭಕ್ತರು ಗಂಗಮ್ಮಾ ಕೊಳದಲ್ಲಿ ಪ್ರಾರ್ಥನೆ ಮಾಡಬಹುದು.
ಬಸವಣ್ಣನ ಗುಡಿ
ಬೆಟ್ಟದ ಕೆಳಗೆ ಒಂದು ಬಸವಣ್ಣನ ಗುಡಿ ಇದೆ. ಈ ಗುಡಿಯ ವಿಶೇಷತೆ ಏನೆಂದರೆ ನಿಮ್ಮ ಯಾವುದೇ ಕೆಲಸವಾಗಬೇಕಿದ್ದರೆ ಆ ಕೆಲಸಕ್ಕೆ ಕೈ ಹಾಕಬಹುದೋ ಇಲ್ಲವೋ, ಎನ್ನುವುದನ್ನು ಪ್ರಶ್ನೆಯ ಮೂಲಕ ಈ ಗುಡಿಯಲ್ಲಿ ಕೇಳುತ್ತಾರೆ. ಹೂವುಗಳ ಮೂಲಕ ಬಸವ ಉತ್ತರ ನೀಡುತ್ತಾನಂತೆ. ಕೆಲಸ ಕೈಗೂಡುವುದಾದರೆ ಸಮ ಸಂಖ್ಯೆಯ ಹೂವು, ಕೆಲಸ ಕೈಗೂಡದಿದ್ದರೆ ಬೆಸ ಸಂಖ್ಯೆಯ ಹೂವಿನ ಮೂಲಕ ಉತ್ತರ ನೀಡುತ್ತಾನಂತೆ. ಇಲ್ಲಿಯ ದೇವರು ಬಹಳ ಶಕ್ತಿಶಾಲಿಯಾಗುದ್ದು, ಭಕ್ತರ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತಾನಂತೆ.
ತಲುಪುವುದು ಹೇಗೆ?
ಈ ದೇವಾಲಯಕ್ಕೆ ಯಾವ ಕಾಲದಲ್ಲಿ ಬೇಕಾದರೂ ಭೇಟಿ ನೀಡಬಹುದು. ಮೈಸೂರು ವಿಮಾನ ನಿಲ್ದಾಣ ಇಲ್ಲಿಗೆ ಸಮೀಪವಿರುವ ವಿಮಾನ ನಿಲ್ದಾಣವಾಗಿದೆ. ಇನ್ನು ಹಾಸನ ಜಂಕ್ಷನ್ ಇಲ್ಲಿಗೆ ಸಮೀಪ ಇರುವ ರೈಲು ನಿಲ್ದಾಣವಾಗಿದೆ. ನೀವು ಸಾರ್ವಜನಿಕ ಸಾರಿಗೆಯ ಮೂಲಕವೂ ಇಲ್ಲಿಗೆ ತಲುಪಬಹುದು.
ಅರಸೀಕೆರೆಯಲ್ಲಿ ಭೇಟಿ ನೀಡಲು ಉತ್ತಮ ಸ್ಥಳಗಳ ಪಟ್ಟಿ
1. ಹೊಯ್ಸಳೇಶ್ವರ ದೇವಸ್ಥಾನ
2. ಶ್ರೀ ವೀರನಾರಾಯಣ ಸ್ವಾಮಿ ದೇವಸ್ಥಾನ
3. ಶ್ರೀ ಚಂದ್ರಮೌಳೇಶ್ವರ ದೇವಸ್ಥಾನ
4. ಮಾಲೇಕಲ್ ತಿರುಪತಿ ಬೆಟ್ಟ
5. ಶಿವಗಂಗೆ ಬೆಟ್ಟ
6. ಕೊಂಡಜ್ಜಿ ಕೆರೆ
7. ಬನಶಂಕರಿ ದೇವಸ್ಥಾನ
2. ಶ್ರೀ ವೀರನಾರಾಯಣ ಸ್ವಾಮಿ ದೇವಸ್ಥಾನ
3. ಶ್ರೀ ಚಂದ್ರಮೌಳೇಶ್ವರ ದೇವಸ್ಥಾನ
4. ಮಾಲೇಕಲ್ ತಿರುಪತಿ ಬೆಟ್ಟ
5. ಶಿವಗಂಗೆ ಬೆಟ್ಟ
6. ಕೊಂಡಜ್ಜಿ ಕೆರೆ
7. ಬನಶಂಕರಿ ದೇವಸ್ಥಾನ
Location
Label List
Arakalagudu
(3)
Arasikere
(8)
Attigundi
(1)
Belur
(4)
Bhagamandala
(1)
Bindiga
(1)
Chamarajanagar
(5)
Channarayapatna
(1)
Chikmangalore
(16)
Coorg
(15)
Dakshina kannada
(1)
Gundlupete
(2)
Hanur
(1)
Hassan
(26)
Hirekolale
(1)
Holenarasipura
(2)
Hosanagara
(2)
K.R.Pete
(3)
Kadaba
(1)
Kadur
(1)
Kalasa
(2)
kesavinamane
(1)
Kollegala
(1)
Koratagere
(1)
Krishnarajapete
(3)
Kushalnagar
(4)
Madikeri
(6)
Malavalli
(1)
Manchetevaru
(1)
Mandya
(27)
Mysore
(21)
Nagamangala
(1)
Nagarahole
(1)
Nagenahalli
(2)
Pandaravalli
(1)
Pandavapura
(9)
Periyapatna
(1)
Sagara
(9)
Sakaleshpura
(3)
Shivamogga
(21)
Shringeri
(1)
Sira
(1)
Somwarpete
(2)
Soraba
(1)
Srirangapatna
(8)
Talakaveri
(1)
Tarikere
(4)
Tirthahalli
(6)
Tumkur
(8)
Turuvekere
(2)
Udupi
(1)
Yelandur
(1)
Post a Comment
Post a Comment