ಶ್ರೀ ರಾಮದೇವರ ಕಟ್ಟೆ ಹೊಳೆನರಸೀಪುರ

 SRI RAMADEVARA KATTE HOLENARASIPURA


ಹೇಮಾವತಿ ನದಿಗೆ ಅಡ್ಡಲಾಗಿ ಶ್ರೀರಾಮದೇವರ ಅಣೆಕಟ್ಟು ಸ್ಥಾಪಿಸಲಾಗಿದೆ. ಹಾಸನ ಹೊಳೆನರಸೀಪುರ ರಸ್ತೆಯಲ್ಲಿ ಹಾಸನದಿಂದ 22 ಕಿ.ಮೀ ದೂರದಲ್ಲಿರುವ ಈ ಅಣೆಕಟ್ಟನ್ನು 1830 ರಲ್ಲಿ ಸ್ಥಾಪಿಸಲಾಗಿದೆ.ಎಡಮತ್ತು ಬಲ ದಂಡೆ ನಾಲೆಗಳ ಮೂಲಕ ಈ ಅಣೆಕಟ್ಟೆಯಿಂದ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ.ಮಿನಿ ವಿದ್ಯುತ್ ಉತ್ಪಾದನಾ ಘಟಕವು ಕಾರ್ಯಾರಂಭ ಮಾಡಿದೆ. ಈ ಅಣೆಕಟ್ಟು ಈಗ ಪ್ರವಾಸಿ ಕೇಂದ್ರದ ಮುಖ್ಯ ಬಿಂದುವಾಗಿದೆ .

ಶ್ರೀರಾಮಚಂದ್ರನು ವನವಾಸದ ಕಾಲದಲ್ಲಿ  ತನ್ನ ಪರಿವಾರದೊಂದಿಗೆ ಕೆಲ ದಿನಗಳ ಕಾಲ ಇಲ್ಲಿ ತಂಗಿದ್ದರಿಂದ ಈ ಸ್ಥಳವು ಪವಿತ್ರತೆ ಹಾಗೂ ಮಹತ್ವ ಪಡೆದುಕೊಂಡಿದೆ. ನದಿಯ ನೀರು ಸುಮಾರು 500 ಮೀಟರ್ ಉದ್ದದ ಕಟ್ಟೆಯಿಂದ ಆಳದ ನದಿಗೆ ಧುಮುಕುವ ದೃಶ್ಯ ನಯನ ಮನೋಹರವಾಗಿದೆ.

ತಲುಪುವುದು ಹೇಗೆ

ಈ ಸ್ಥಳಕ್ಕೆ ಯಾವುದೇ ವಿಮಾನ ಮತ್ತು ರೈಲು ಸಂಪರ್ಕ ಇರುವುದಿಲ್ಲ.

ರಸ್ತೆ ಮಾರ್ಗದ ಮೂಲಕ ; ಬಸ್ಸಿನ ವ್ಯವಸ್ಥೆಯು ತುಂಬಾ ಕಡಿಮೆ ಇರುತ್ತದೆ ಹಾಗಾಗಿ ಸ್ವಂತ ವಾಹನ ಇರುವವರು ಈ ಸ್ಥಳವನ್ನು ಸುಲಭವಾಗಿ ತಲುಪಬಹುದು 
ಹಾಸನದಿಂದ ಶ್ರೀರಾಮದೇವರ ಕಟ್ಟೆಗೆ 22 ಕಿ.ಮೀ, ಮೈಸೂರಿನಿಂದ 87 ಕಿ.ಮೀ, ಬೆಂಗಳೂರಿನಿಂದ 176  ಕಿ.ಮೀ ಹೊಳೆನರಸೀಪುರದಿಂದ 9 ಕಿ.ಮೀ

 LOCATION 

Post a Comment