ಕರ್ನಾಟಕದ "ಶಿಲ್ಪಕಲೆಗಳ ನಾಡು" ಶ್ರವಣಬೆಳಗೊಳದ ಪ್ರೇಕ್ಷಣೀಯ ಸ್ಥಳಗಳು

 

Must visit places in Shravanabelagola


ಶ್ರವಣಬೆಳಗೊಳ ಹಾಸನ ಜಿಲ್ಲೆಯ ಐತಿಹಾಸಿಕ ಧಾರ್ಮಿಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. 57 ಅಡಿ ಎತ್ತರದ ಏಕಶಿಲಾ ಬಾಹುಬಲಿ ಮೂರ್ತಿಯನ್ನು ಚಾವುಂಡರಾಯನು ನಿರ್ಮಿಸಿದನು.ಇದು ವಿಶ್ವದ ಅತಿ ಎತ್ತರದ ಏಕಶಿಲಾ ಮೂರ್ತಿಯಾಗಿದೆ ಜೈನರ ಧಾರ್ಮಿಕ ಪ್ರಸಿದ್ಧ ಕೇಂದ್ರವಾಗಿದೆ ಇದರಲ್ಲಿ ಪ್ರಮುಖವಾಗಿ 
a)ವಿಂಧ್ಯಗಿರಿ (ದೊಡ್ಡ ಬೆಟ್ಟ)
b)ಚಂದ್ರಗಿರಿ (ಚಿಕ್ಕ ಬೆಟ್ಟ)
ಎಂಬ ಎರಡು ಸ್ಥಳಗಳಿವೆ 

ತಲುಪುವ ಬಗೆ

🚉 ರೈಲು ಮಾರ್ಗದ ಮೂಲಕ; ಶ್ರವಣಬೆಳಗೊಳದಲ್ಲಿ ರೈಲು ನಿಲ್ದಾಣವಿದ್ದು ಹಾಸನ ಬೆಂಗಳೂರು ಮೈಸೂರು ಹುಬ್ಬಳ್ಳಿ ಶಿವಮೊಗ್ಗ ಮಂಗಳೂರು ಕಡೆಗಳಿಂದ ನೇರವಾಗಿ ಈ ಸ್ಥಳವನ್ನು ತಲುಪಬಹುದು.

🚘ರಸ್ತೆ ಮೂಲಕ ; ಶ್ರವಣಬೆಳಗೊಳವು ಹಾಸನ ಬೆಂಗಳೂರು ಮೈಸೂರು ಮಂಗಳೂರು ಮಡಿಕೇರಿ ಚಿಕ್ಕಮಗಳೂರಿಗೆ ಉತ್ತಮ ಸಂಪರ್ಕ ಹೊಂದಿದೆ. ಸರ್ಕಾರಿ ಸಾರಿಗೆ ವ್ಯವಸ್ಥೆಯನ್ನು ಬಳಸಿಕೊಂಡು ಈ ಮಾರ್ಗವನ್ನು ಸುಲಭವಾಗಿ ತಲುಪಬಹುದು. ಶ್ರವಣಬೆಳಗೊಳಕ್ಕೆ ನೇರ ಬಸ್ಸುಗಳಿಲ್ಲ ನೀವು ಚನ್ನರಾಯಪಟ್ಟಣದಲ್ಲಿ ಬದಲಾಯಿಸಬೇಕು.

ಶ್ರವಣಬೆಳಗೊಳವು ಬೆಂಗಳೂರಿನಿಂದ 145 ಕಿ.ಮೀ ದೂರದಲ್ಲಿದ್ದು ಸ್ವಂತ ಕಾರಿನಲ್ಲಿ ಬರುವವರು ಹಿರಿಸಾವೆಯಿಂದ ಬೆಳಗೊಳವನ್ನು ಸುಲಭವಾಗಿ ತಲುಪಬಹುದು.

     ಮೈಸೂರಿನಿಂದ 85km ದೂರವನ್ನು ಹೊಂದಿದ್ದು ಕಿಕ್ಕೇರಿಯ ಮುಖಾಂತರ ಶ್ರವಣಬೆಳಗೊಳವನ್ನು ತಲುಪಬಹುದು.

     ಹಾಸನದಿಂದ 52km ದೂರವನ್ನು ಹೊಂದಿದ್ದು ಚನ್ನರಾಯಪಟ್ಟಣದ ಮೂಲಕ ಶ್ರವಣಬೆಳಗೊಳವನ್ನು ತಲುಪಬಹುದು.

🚀 ವಿಮಾನದ ಮೂಲಕ ; ಹಾಸನದಲ್ಲಿ ಯಾವುದೇ ರೀತಿಯ ವಿಮಾನ ನಿಲ್ದಾಣ ಇಲ್ಲದೆ ಇರುವುದರಿಂದ ನಾವು ರಸ್ತೆಯ ಮುಖಾಂತರ ಈ ಸ್ಥಳವನ್ನು ತಲುಪಬಹುದು. ರಸ್ತೆ ಸಾರಿಗೆ ಇಲ್ಲಿ ಪ್ರಮುಖವಾಗಿದ್ದು ಇದರ ಉಪಯೋಗವನ್ನು ಪಡೆದುಕೊಳ್ಳಬಹುದು.

ಶ್ರವಣಬೆಳಗೊಳ ಸುತ್ತಮುತ್ತಲಿನ ಪ್ರವಾಸಿ ತಾಣಗಳು

ಕಿಕ್ಕೇರಿ; ಶ್ರವಣಬೆಳಗೊಳದಿಂದ ಕಿಕ್ಕೇರಿ 14 ಕಿಲೋ ಮೀಟರ್ ದೂರದಲ್ಲಿದೆ

 ಬ್ರಹ್ಮೇಶ್ವರ ದೇವಸ್ಥಾನವು ಕಿಕ್ಕೇರಿ ಗ್ರಾಮದಲ್ಲಿ ಹೊಯ್ಸಳ ವಾಸ್ತುಶೈಲಿಯೊಂದಿಗೆ 12 ಶತಮಾನದ ಹಿಂದೂ ದೇವಾಲಯವಾಗಿದೆ.
ಪಂಚಲಿಂಗೇಶ್ವರ ದೇವಸ್ಥಾನ ಗೋವಿಂದನಹಳ್ಳಿ ಮಂಡ್ಯ ಜಿಲ್ಲೆಯಲ್ಲಿದೆ.ಕಿಕ್ಕೇರಿ ಯಿಂದ 6 ಕಿ.ಮೀ ದೂರದಲ್ಲಿದೆ  ರಾಜ ವೀರ ಸೋಮೇಶ್ವರನ  ಸಮಯದಲ್ಲಿ ನಿರ್ಮಿಸಲಾಯಿತು. ಪಂಚಲಿಂಗೇಶ್ವರ ಎಂಬ ಹೆಸರು ಅಕ್ಷರಶಃ ಐದು ಲಿಂಗಗಳು.

ಮೇಲುಕೋಟೆ; ಮೇಲುಕೋಟೆಯು ಶ್ರವಣಬೆಳಗೊಳದಿಂದ 35km ದೂರದಲ್ಲಿದ್ದು ಡೈರೆಕ್ಟ್ ಬಸ್ಸಿನ ವ್ಯವಸ್ಥೆ ಇರುವುದಿಲ್ಲ ಸ್ವಂತ ವಾಹನ ಇರುವವರು  ಈ ಸ್ಥಳವನ್ನು ಸುಲಭವಾಗಿ ತಲುಪಬಹುದು. ಮೇಲುಕೋಟೆಯು ಬೆಂಗಳೂರಿನಿಂದ 137 km, ಹಾಸನದಿಂದ 87 ಕಿಲೋಮೀಟರ್ ಮತ್ತು ಮೈಸೂರಿನಿಂದ 55 km ದೂರದಲ್ಲಿದೆ.

  👉ಚೆಲುವನಾರಾಯಣ ಸ್ವಾಮಿ ದೇವಸ್ಥಾನ 
 👉ಯೋಗ ನರಸಿಂಹ ದೇವಸ್ಥಾನ 
 👉ರಾಯ ಗೋಪುರ
👉ಮೇಲುಕೋಟೆಯ ಪುಷ್ಕರಣಿ
👉ಅಕ್ಕ-ತಂಗಿ ಕೊಳ

ಶೆಟ್ಟಿಹಳ್ಳಿ ಚರ್ಚ್ ; ಶೆಟ್ಟಿ ಹಳ್ಳಿ ಚರ್ಚ್ ಶ್ರವಣಬೆಳಗೊಳದಿಂದ 71 ಕಿಲೋಮೀಟರ್ ಮತ್ತು ಹಾಸನದಿಂದ 21 ಕಿಲೋಮೀಟರ್ ದೂರದಲ್ಲಿದೆ.ಶೆಟ್ಟಿಹಳ್ಳಿ ಇಂದ ಎರಡು ಕಿಲೋಮೀಟರ್ ದೂರದಲ್ಲಿರುವ ಈ ಚರ್ಚನ್ನು 1860ರ ದಶಕದಲ್ಲಿ ಫ್ರೆಂಚ್ ಮಿಷನರಿಗಳು ನಿರ್ಮಿಸಿದರು. ಈ ಚರ್ಚ್ ಗೋತಿಕ್ ವಾಸ್ತುಶಿಲ್ಪದ ಭವ್ಯವಾದ ರಚನೆಯಾಗಿದೆ. 1960ರಲ್ಲಿ ಹೇಮಾವತಿ ಅಣೆಕಟ್ಟು ಮತ್ತು ಜಲಾಶಯದ ನಿರ್ಮಾಣದ ನಂತರ ಅಣೆಕಟ್ಟಿನಿಂದಾಗಿ ಚರ್ಚ್ ನೀರಿನಲ್ಲಿ ಮುಳುಗಿತು ಅಂದಿನಿಂದ ಇದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ ಅಲ್ಲಿ ಮಳೆಗಾಲದಲ್ಲಿ ಅರ್ಧ ಮುಳುಗಿದ ಚರ್ಚ್ ಅನ್ನು ನೋಡಲು ಜನರು ಸೇರುತ್ತಾರೆ ಇದನ್ನು ಮುಳುಗಿದ ಚರ್ಚ್ ಅಥವಾ ತೇಲುವ ಚರ್ಚ್ ಎಂದು ಕರೆಯಲಾಗುತ್ತದೆ.

Location 

Post a Comment