ಗೋಲ್ಡನ್ ಟೆಂಪಲ್, ಕುಶಾಲನಗರ /ಚಿನ್ನದ ದೇವಾಲಯ -ಕರ್ನಾಟಕದಲ್ಲಿ ಟಿಬೆಟಿಯನ್ಸ್
Golden Temple Bylakuppe/Kushalnagar-Karnataka
ಬೈಲುಕುಪ್ಪೆಯಲ್ಲಿ ಗೋಲ್ಡನ್ ಟೆಂಪಲ್ ಪ್ರಮುಖ ಆಕರ್ಷಣೀಯ ಕೇಂದ್ರ. ದೇವಾಲಯದ ಒಳಗೆ ಹೋದಂತೆ ಇನ್ನೊಂದು ಪ್ರಪಂಚಕ್ಕೆ ಕಾಲಿಟ್ಟಂತಹ ಅನುಭವ. ಪ್ರಶಾಂತ ವಾತಾವರಣ. ಸುವರ್ಣ ಮಂದಿರದಲ್ಲಿ 40 ಅಡಿ ಎತ್ತರದ ಮೂರು ಚಿನ್ನದ ಪ್ರತಿಮೆಗಳು ಕಾಣಬಹುದು. ಪದ್ಮಸಂಭವ ಮತ್ತು ಅಮಿತಾಯುಷ್ ಮೂರ್ತಿಯ ಮಧ್ಯದಲ್ಲಿ ಬುದ್ಧನ ಮೂರ್ತಿ ಶೋಬಿಸುತ್ತಿದೆ. ಅಲ್ಲಿಯ ಗೋಡೆಗಳನ್ನು ಬಣ್ಣದ ಪೆಯಿಂಟಿಂಗ್ನಿಂದ ಚಿತ್ರಿಸಲಾಗಿದೆ.
ಒಂದು ಕಾಲದಲ್ಲಿ ಚೀನಾದಿಂದ ನಿರಾಶ್ರಿತರಾಗಿ ಬಂದು ಕುಶಾಲನಗರ ಬಳಿಯ ಬೈಲುಕುಪ್ಪೆಯ ಬೆಂಗಾಡಿನಲ್ಲಿ ನೆಲೆ ನಿಂತ ಟಿಬೆಟಿಯನ್ನರು ಇವತ್ತು ಆ ಸ್ಥಳವನ್ನು ಅಭಿವೃದ್ಧಿಗೊಳಿಸಿ ವಿಶ್ವಮಟ್ಟದಲ್ಲಿ ಗಮನಸೆಳೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸಾವಿರಾರು ಪ್ರವಾಸಿಗರು ಇತ್ತ ಕಡೆ ತಮ್ಮ ನೋಟ ಚೆಲ್ಲುವಂತೆ ಮಾಡಿದ್ದಾರೆ.
ಮೈಸೂರು ಜಿಲ್ಲೆಯಿಂದ ಸುಮಾರು 88ಕಿ.ಮೀ. ದೂರದಲ್ಲಿರುವ ಬೈಲುಕುಪ್ಪೆ ಪ್ರವಾಸಿತಾಣವಾಗಿ ಖ್ಯಾತಿ ಪಡೆಯಲು ಇಲ್ಲಿ ನಿರ್ಮಿಸಲ್ಪಟ್ಟಿರುವ ಸ್ವರ್ಣದೇಗುಲ(ಗೋಲ್ಡನ್ ಟೆಂಪಲ್)ವೇ ಮುಖ್ಯ ಕಾರಣವಾಗಿದೆ. ಟಿಬೆಟ್ ನಿರಾಶ್ರಿತರ ಶಿಬಿರವು ಸ್ವರ್ಣ ದೇಗುಲ ಸೇರಿದಂತೆ ಸುಮಾರು ಹದಿನೇಳಕ್ಕೂ ಹೆಚ್ಚು ವಿವಿಧ ದೇಗುಲಗಳು, ಧ್ಯಾನಕೇಂದ್ರ, ಸನ್ಯಾಸಿನಿಯರ ಬೌದ್ಧವಿಹಾರ, ಬೌದ್ಧ ಭಿಕ್ಷುಗಳ ಮಹಾವಿದ್ಯಾಲಯ, ಆಸ್ಪತ್ರೆ, ಬೌದ್ಧವಿಹಾರದ ಸುತ್ತ 1300 ಪ್ರಾರ್ಥನಾ ಚಕ್ರಗಳು, ಎಂಟು ಸ್ಥೂಪಗಳು ಹೀಗೆ ತನ್ನದೇ ವೈಶಿಷ್ಟ್ಯತೆಯಿಂದ ಪ್ರವಾಸಿಗರನ್ನು ಸೆಳೆಯುತ್ತಿವೆ.
ಈ ಸ್ವರ್ಣ ದೇಗುಲ ಟಿಬೆಟ್ ದೇಶದ ಸಂಪ್ರದಾಯಗಳಿಗೆ ತಕ್ಕಂತೆ ನಿರ್ಮಾಣಗೊಂಡಿದೆ. ಪರಮ ಪೂಜ್ಯ ಪನೋರ್ ರಿನ್ ಪೋಚೆಯವರು ಇದನ್ನು 1995ರಲ್ಲಿ ಆರಂಭಿಸಿ 1999ರಲ್ಲಿ ಪೂರ್ಣಗೊಳಿಸಿದರು. ನಾಲ್ಕು ವರ್ಷಗಳ ಸತತ ಪರಿಶ್ರಮದಿಂದ ಆಕರ್ಷಕ, ವೈಶಿಷ್ಟ್ಯಪೂರ್ಣವಾಗಿಯೂ ನಿರ್ಮಿಸುವಲ್ಲಿ ಪೆನೋರ್ ರಿನ್ ಪೋಚೆಯವರ ಸಾಧನೆ ಸ್ಮರಣೀಯ. ಬೈಲುಕುಪ್ಪೆಗೆ ತೆರಳುವ ಪ್ರವಾಸಿಗರನ್ನು ಸೆಳೆಯುವ ಸ್ವರ್ಣದೇಗುಲ ಮನಸ್ಸಿಗೆ ಹೊಸ ಅನುಭವ ನೀಡಿ ನಮ್ಮಲ್ಲಿದ್ದ ದುಃಖ, ದುಗುಡ, ದುಮ್ಮಾನಗಳು ಮಾಯವಾಗಿ ಮನಸ್ಸು ಉಲ್ಲಾಸದಿಂದ ತೇಲಾಡುವಂತೆ ಮಾಡುತ್ತದೆ. ದೇವಾಲಯದ ಬಳಿ ಸುಂದರ ಉದ್ಯಾನವನವಿದ್ದು, ಇಲ್ಲಿ ಕುಳಿತು ಪ್ರವಾಸಿಗರು ವಿಶ್ರಾಂತಿ ಪಡೆಯಬಹುದು. ಒಟ್ಟಾರೆ ಬೈಲುಕುಪ್ಪೆಯ ಟಿಬೆಟ್ ನಿರಾಶ್ರಿತರ ಶಿಬಿರವು ಒಂದು 'ಮಿನಿ ಟಿಬೆಟ್ ದೇಶದಂತೆ' ಗೋಚರಿಸುವುದರಲ್ಲಿ ಸಂದೇಹವಿಲ್ಲ. ಹೀಗಾಗಿಯೇ ಇಲ್ಲಿಗೆ ದಿನಂಪ್ರತಿ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.
ಸ್ವರ್ಣ ದೇಗುಲದ ವಿಶೇಷತೆ ಏನು?
ಸ್ವರ್ಣ ದೇವಾಲಯವು ಉತ್ಕೃಷ್ಟ ಶಿಲ್ಪಕಲೆಯಿಂದ ಕೂಡಿದ ಮಂದಿರವಾಗಿದ್ದು, ಕಲೆಗೆ ಚಿನ್ನದ ಲೇಪನ ಮೆರುಗು ನೀಡಿದೆ. ಗೋಲ್ಡನ್ ಟೆಂಪಲ್ ಸಂಕೀರ್ಣವು ದೊಡ್ಡದಾಗಿದೆ ಮತ್ತು ಇದು 40 ಅಡಿ ಎತ್ತರದ ಗುರು ಪದ್ಮಸಂಭವ , ಬುದ್ಧ ಸಕ್ಯಮುನಿ ಮತ್ತು ಅಮಿತಾಯಸ್ ಅವರ ಚಿತ್ರಗಳನ್ನು ಹೊಂದಿದೆ. ಇವುಗಳನ್ನು ಚಿನ್ನಲೇಪಿತ ತಾಮ್ರದ ಲೋಹದಿಂದ ನಿರ್ಮಿಸಲಾಗಿದೆ.
ದೇವಾಲಯದ ಗೋಪುರವು ಹೆಚ್ಚು ಅಲಂಕೃತವಾಗಿದೆ. ದ್ವಾರದ ಸುತ್ತಲಿನ ಹೊರಗಿನ ಗೋಡೆಗಳನ್ನು ಬೃಹತ್ ವರ್ಣರಂಜಿತ ಭಿತ್ತಿಚಿತ್ರಗಳಿಂದ ಅಲಂಕರಿಸಲಾಗಿದೆ. ಬಾಗಿಲುಗಳು, ಕೆಂಪು ಬಣ್ಣದಲ್ಲಿ, ಬೃಹತ್ ಚಿನ್ನದ ನಾಕರ್ಸ್ ಮತ್ತು ಟಸೆಲ್ಗಳು ನೇತಾಡುವ ದಪ್ಪ ಹೆಣೆದ ಹಗ್ಗವನ್ನು ಹೊಂದಿವೆ. ಟಿಬೆಟಿಯನ್ ಬೌದ್ಧ ಪುರಾಣದ ದೇವರುಗಳು ಮತ್ತು ರಾಕ್ಷಸರನ್ನು ಚಿತ್ರಿಸುವ ವರ್ಣರಂಜಿತ ವರ್ಣಚಿತ್ರಗಳಿಂದ ಗೋಡೆಗಳನ್ನು ಅಲಂಕರಿಸಲಾಗಿದೆ. ಈ ಮಠವು ಜ್ಞಾನೋದಯ ಮತ್ತು ಶಿಕ್ಷಣವನ್ನು ಬಯಸುವ ಹೆಚ್ಚಿನ ಸಂಖ್ಯೆಯ ಯುವ ಟಿಬೆಟಿಯನ್ನರನ್ನು ಆಕರ್ಷಿಸುತ್ತದೆ ಮಾತ್ರವಲ್ಲದೆ ಭಾರತ ಮತ್ತು ವಿದೇಶಗಳಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯುತ್ತದೆ.
Post a Comment
Post a Comment