ಮುತ್ತತ್ತಿ ಆಂಜನೇಯ ದೇವಸ್ಥಾನ, ಮಳವಳ್ಳಿ
Muthathi Anjaneya Temple, Malavalli
ಸ್ಥಳ : ಮುತ್ತತ್ತಿ ಆಂಜನೇಯ ದೇವಸ್ಥಾನ, ಮಳವಳ್ಳಿಜಿಲ್ಲೆ: ಮಂಡ್ಯ ಜಿಲ್ಲೆ
ವಿಳಾಸ : ಮುತ್ತತ್ತಿ, ಬಸವನ ಬೆಟ್ಟ ಅರಣ್ಯ, ಹಲಗೂರು ಹೋಬಳಿ, ಮಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲೆ, ಕರ್ನಾಟಕ - 571421
ಸಮಯ : 6 AM - 6 PM
ದೂರ : ಮಳವಳ್ಳಿಯಿಂದ 41 ಕಿ.ಮೀ
ಕನಕಪುರದಿಂದ 36 ಕಿ.ಮೀ
ಮಂಡ್ಯದಿಂದ 70 ಕಿ.ಮೀ
ಮೈಸೂರಿನಿಂದ 90 ಕಿ.ಮೀ
ಬೆಂಗಳೂರಿನಿಂದ 97 ಕಿ.ಮೀ
ಭೇಟಿ ನೀಡಲು ಉತ್ತಮ ಸಮಯ : ಜುಲೈನಿಂದ ಸೆಪ್ಟೆಂಬರ್
ಸಾರಿಗೆ ಆಯ್ಕೆಗಳು : ಬಸ್ /ಕ್ಯಾಬ್/ಆಟೋ
ಪ್ರವೇಶ : ಉಚಿತ
ಪಾರ್ಕಿಂಗ್ : ಉಚಿತ
ಹತ್ತಿರದ ಸ್ಥಳಗಳು : ಭೀಮೇಶ್ವರಿ ಸಾಹಸ ಮತ್ತು ಪ್ರಕೃತಿ ಶಿಬಿರ, ಶಿವನಸಮುದ್ರ, ಮೇಕೆದಾಟು, ಗಣಲು ಜಲಪಾತ, ಕಾವೇರಿ ವನ್ಯಜೀವಿ ಅಭಯಾರಣ್ಯ
ಮುತ್ತತ್ತಿ ಕರ್ನಾಟಕ ರಾಜ್ಯ, ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕು, ಹಲಗೂರು ಹೋಬಳಿಯಲ್ಲಿರುವ ಮುತ್ತತ್ತಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಪ್ರಸಿದ್ದ ಯಾತ್ರಾ ಸ್ಥಳ ಹಾಗೂ ಪ್ರವಾಸಿ ತಾಣವಾಗಿದೆ. ಕಾವೇರಿ ನದಿಯ ಹರಿವಿನ ಸುಂದರ ಪ್ರಕೃತಿ ಸೌಂದರ್ಯದೊಂದಿಗೆ ಕಂಗೊಳಿಸುವ ಚಿಕ್ಕ ಗ್ರಾಮವೇ ಮುತ್ತತ್ತಿ . ಕಾವೇರಿ ನದಿ ನೀರಿನಲ್ಲಿ ಭಾರಿ ಜನಪ್ರಿಯ ಸಾಹಸಕ್ರೀಡೆ ಕೋರಲ್ ರೈಡ್ ನ್ನು ಇಲ್ಲಿ ಪ್ರವಾಸಿಗರು ಆನಂದಿಸಬಹುದು. ಕಾವೇರಿ ವನ್ಯಜೀವಿ ಧಾಮ ಮತ್ತು ದಟ್ಟ ಅರಣ್ಯಗಳಿಂದ ಸುತ್ತುವರಿದಿರುವ ಮುತ್ತತ್ತಿ ಗ್ರಾಮದ ಪ್ರಕೃತಿ ಸೌಂದರ್ಯ ಮನ ಸೆಳೆಯುತ್ತದೆ. ರಮಣೀಯ ಕಣಿವೆ, ರಭಸದಿಂದ ಹರಿಯುವ ನೀರಿನ ಸೆಳವುಳ್ಳ ಸಣ್ಣ ಹಳ್ಳಗಳು ಇಲ್ಲಿವೆ. ಹಲವಾರು ಬಗೆಯ ಪ್ರಾಣಿ ಪಕ್ಷಿಗಳು ಈ ಅರಣ್ಯದಲ್ಲಿ ನೆಲೆಸಿವೆ.
ಮುತ್ತತ್ತಿಯ ಇತಿಹಾಸವೇನು?
ಮುತ್ತತ್ತಿಯ ಪೌರಾಣಿಕ ಮಹತ್ವ. ತ್ರೇತಾಯುಗದಲ್ಲಿ, ರಾವಣನನ್ನು ಕೊಂದ ನಂತರ, ಭಗವಂತ (ರಾಮ) ವಿಭೀಷಣ ಮತ್ತು ರಾಮನಿಗೆ ಪಟ್ಟಾಭಿಷೇಕ ಮಾಡುತ್ತಾನೆ ಮತ್ತು ಸೀತೆ ಮತ್ತು ಲಕ್ಷ್ಮಣರು ಅಯೋಧ್ಯೆಗೆ ಹಿಂದಿರುಗುತ್ತಿದ್ದರು. ಹಿಂದಿರುಗುವ ದಾರಿಯಲ್ಲಿ ಅವರು ಕಾವೇರಿ ನದಿಯ ದಡದಲ್ಲಿರುವ ಈ ಕಾಡಿನ ಮೂಲಕ ನಡೆದರು ಎಂದು ನಂಬಲಾಗಿದೆ.ಶ್ರೀ ಆಂಜನೇಯಸ್ವಾಮಿ ಮೂರ್ತಿ
ಮಂಡ್ಯ ಜಿಲ್ಲೆಯ ಕಾವೇರಿ ದಡದಲ್ಲಿರುವ ಮುತ್ತತ್ತಿ ಗ್ರಾಮವು ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಬೆಂಗಳೂರಿನಿಂದ ರಸ್ತೆ ಮೂಲಕ 90 ನಿಮಿಷಗಳಲ್ಲಿ ಮುತ್ತತ್ತಿಯನ್ನು ತಲುಪಬಹುದು. ಮುತ್ತತ್ತಿ ಪೌರಾಣಿಕ ಮಹಾಕಾವ್ಯವಾದ ರಾಮಾಯಣದಲ್ಲಿ ಬರುವ ಒಂದು ಪ್ರದೇಶವಾಗಿದೆ ಎಂಬ ಪ್ರತೀತಿ ಇದೆ.ಇಲ್ಲಿ ಪ್ರಸಿದ್ಧವಾದ ಹನುಮಾನ ಮಂದಿರವಿದೆ ಅದಕ್ಕೆ ಸ್ಥಳೀಯರು ಹನುಮಂತರಾಯ ದೇವಸ್ಥಾನವೆಂದು ಕರೆಯುತ್ತಾರೆ.ಶ್ರೀ ಆಂಜನೇಯಸ್ವಾಮಿ ಮೂರ್ತಿಯು ಮುತ್ತತ್ತಿಯಲ್ಲಿ ಭೂಮಿಯಿಂದ ಮೂಡಿದ್ದು ಸದರಿ ಜಾಗದಲ್ಲಿ ಮೂಡಿರುವ ಮೂರ್ತಿಯನ್ನು ಭೂಮಿಯಲ್ಲೇ ಹೂತು ಹನುಮಂತನ ವಿಗ್ರಹವನ್ನು ಕೆತ್ತಿಸಿ ಪ್ರತಿಷ್ಠಾಪನೆ ಮಾಡಿ ಆ ಜಾಗದಲ್ಲಿ ದೇವಸ್ಥಾನವನ್ನು 1986-87ನೇ ಸಾಲಿನಲ್ಲಿ ಸಾರ್ವಜನಿಕ/ ಭಕ್ತಾಧಿಗಳ ವಂತಿಕೆಯಿಂದ ಹಣ ಕ್ರೂಢೀಕರಿಸಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಸದರಿ ಜಾಗದಲ್ಲಿ ನಿರ್ಮಿಸಿರುವ ಹನುಮಂತನು ಸಾರ್ವಜನಿಕ/ಭಕ್ತಾಧಿಗಳಿಗೆ ಅಭಯ ಹಸ್ತವನ್ನು ನೀಡುತ್ತಾ ನೆಲೆಸಿದ್ದರಿಂದ ಆ ಜಾಗವನ್ನು ಮುತ್ತತ್ತಿಯೆಂದು ಕರೆಯುತ್ತಾರೆ.
ಪುರಾಣದ ಹಿನ್ನೆಲೆ
ರಾಮಾಯಣದ ಕಾಲದಲ್ಲಿ ಶ್ರೀರಾಮಚಂದ್ರಪ್ರಭು ಲಂಕಾಧಿಪತಿ ರಾವಣನನ್ನು ಕೊಂದು ವಿಭೀಷಣನಿಗೆ ಪಟ್ಟಕಟ್ಟಿ, ತಂದೆ ಶ್ರೀ ರಾಮಚಂದ್ರಪ್ರಭು ,ತಾಯಿ ಸೀತಾಮಾತೆ, ಲಕ್ಷ್ಮಣ ಮತ್ತು ಆಂಜನೇಯರ ಸಮೇತ ಲಂಕೆಯಿಂದ ಅಯೋಧ್ಯೆಗೆ ಹಿಂದಿರುಗಿ ಹೋಗುವಾಗ ಬಸವನ ಬೆಟ್ಟ ಅರಣ್ಯ ಪ್ರದೇಶದ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಒಂದು ದಿನ ಇಲ್ಲೇ ತಂಗಿ ಹೋಗಲು ನಿರ್ಧರಿಸುತ್ತಾರೆ ಮರುದಿನ ಬೆಳಗ್ಗೆ ಕಾವೇರಿ ನದಿ ತೀರದಲ್ಲಿರುವ ತಿರುಗಣೆ ಮಡುವಿನಲ್ಲಿ ಕುಳಿತು ತಾಯಿ ಸೀತಾಮಾತೆದೇವಿ ಸ್ನಾನ ಮಾಡುತ್ತಿದ್ದಾಗ ಸೀತಾಮಾತೆಯ ಮುತ್ತಿನ ಮೂಗುತಿಯು ಕಾವೇರಿ ನದಿಯಲ್ಲಿ ಬಿದ್ದು ಹೋಗಿರುವುದಾಗಿ ತನ್ನ ಪತಿಯಾದ ಶ್ರೀ ರಾಮರಿಗೆ ಹೇಳಿದಾಗ ಅಲ್ಲೇ ಇದ್ದ ಹನುಮಂತನು ನೀರಿನಲ್ಲಿದ್ದ ಮೂಗುತಿಯನ್ನು ಹುಡುಕಲು ಶ್ರೀ ರಾಮಚಂದ್ರ ಪ್ರಭು ಹೇಳುತ್ತಾರೆ ಅವರ ಆಜ್ಞೆಯಂತೆ ಆಂಜನೇಯಸ್ವಾಮಿ ಅವರು ತನ್ನ ಬಾಲವನ್ನು ನೀರಿನಲ್ಲಿ ತಿರುಗಿಸಿ ನೀರಿನಲ್ಲಿ ಕಳೆದುಹೋಗಿದ್ದ ಮುತ್ತಿನ ಮೂಗುತಿ ಕಾಣಿಸಿದಾಗ ಹನುಮಂತನು ಮೂಗುತಿಯನ್ನು ಸೀತಾಮಾತೆಗೆ ನೀಡಿದನು. ಹನುಮಂತ ಬಾಲವನ್ನು ನೀರಿನಲ್ಲಿ ತಿರುಗಿಸಿದ ರಭಸಕ್ಕೆ ಆ ಜಾಗದಲ್ಲಿ ಇಂದಿಗೂ ಕಾವೇರಿ ನದಿಯ ನೀರು ಒಂದು ಸುತ್ತು ತಿರುಗಿ ಹೋಗುತ್ತದೆ ಆದಕಾರಣ ಆ ಸ್ಥಳಕ್ಕೆ ತಿರುಗಣೆಮಡು ಎಂದು ಕರೆದು ಪ್ರಸಿದ್ದಿಯಾಗಿದೆ. ಹನುಮಂತನು ಸೀತಾಮಾತೆಗೆ ಮುತ್ತಿನ ಮೂಗುತಿಯನ್ನು ತನ್ನ ಬಾಲದಲ್ಲಿ ಕೊಟ್ಟಿರುವುದಕ್ಕೆ ತಾಯಿ ಸೀತಾಮಾತೆದೇವಿ ಆಂಜನೇಯಸ್ವಾಮಿ ಅವರನ್ನು ಮುತ್ತೆತ್ತರಾಯನೆಂದು ಹೆಸರು ಕರೆದರು. ಅಂದರೆ ಸೀತಾಮಾತೆಯ ಮುತ್ತಿನ ಮೂಗುತಿಯನ್ನು ಬಾಲದಲ್ಲಿ ಎತ್ತಿಕೊಟ್ಟ ಕಾರಣ ಮುತ್ತೆತ್ತರಾಯ ಎಂಬ ಹೊಸ ನಾಮಕರಣವನ್ನು ತಾಯಿ ಸೀತಾದೇವಿ ಮಾಡಿದರು, ಹಾಗೂ ಆಂಜನೇಯಸ್ವಾಮಿಯನ್ನು ಈ ಕ್ಷೇತ್ರದಲ್ಲಿ ಮುತ್ತೆತ್ತರಾಯಸ್ವಾಮಿಯಾಗಿ ನೆಲೆಸು ಹಾಗೂ ಈ ಕ್ಷೇತ್ರಕ್ಕೆ ಮುತ್ತತ್ತಿ ಎಂದು ಹೆಸರು ಈಗ ಆ ಸ್ಥಳವನ್ನು ಮುತ್ತತ್ತಿಯೆಂದು ಕರೆಯುತ್ತಾರೆ.ಮುತ್ತತ್ತಿ ಯಾವ ದೇವರು?
ಮುತ್ತತ್ತಿಯು ಪೌರಾಣಿಕ ಪ್ರಾಮುಖ್ಯತೆಯ ಸ್ಥಳವಾಗಿದೆ, ಏಕೆಂದರೆ ಸೀತಾ ದೇವಿಯು ಇಲ್ಲಿ ಹನುಮಂತನಿಗೆ ವಿಶೇಷ ಹೆಸರನ್ನು ನೀಡಿದ್ದಾಳೆ ಎಂದು ನಂಬಲಾಗಿದೆ. ನೀವು ಪ್ರಾಚೀನ ಹನುಮಂತರಾಯ ದೇವಸ್ಥಾನಕ್ಕೆ ಭೇಟಿ ನೀಡಬಹುದು ಮತ್ತು ವಾನರ ದೇವರಿಂದ ಆಶೀರ್ವಾದ ಪಡೆಯಬಹುದು.ಮುತ್ತತ್ತಿಯಲ್ಲಿ ಯಾವುದು ಪ್ರಸಿದ್ಧ?
ಒಂದು ಉತ್ತಮ ಮೀನುಗಾರಿಕೆ ತಾಣವಾದ ಮುತ್ತತ್ತಿಯು ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಮಹಸೀರ್ ಮೀನು ಮತ್ತು ವಿವಿಧ ಪ್ರಾಣಿಗಳಿಗೆ ಹೆಸರುವಾಸಿಯಾಗಿದೆ. ವಿಹಾರಕ್ಕೆ ಸೂಕ್ತವಾದ ಸ್ಥಳ, ರೇವಣಸಿದ್ಧೇಶ್ವರ ಬೆಟ್ಟ (20 ಕಿಮೀ) ಪಾದಯಾತ್ರೆಯು ಸಾಹಸ ಪ್ರಿಯರನ್ನು ರಂಜಿಸುತ್ತದೆ.ಶ್ರೀ ಮುತ್ತತ್ತಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲು ಉತ್ತಮ ಸಮಯ
ಶ್ರೀ ಮುತ್ತತ್ತಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಮಳೆಗಾಲದ ಅವಧಿಯಲ್ಲಿ (ಜುಲೈನಿಂದ ಸೆಪ್ಟೆಂಬರ್), ಸುತ್ತಮುತ್ತಲಿನ ಭೂದೃಶ್ಯವು ಸಮೃದ್ಧವಾದ ಹಸಿರು ಮತ್ತು ಕಾವೇರಿ ನದಿಯು ಪೂರ್ಣವಾಗಿ ಹರಿಯುತ್ತದೆ, ರಮಣೀಯ ನೋಟಗಳು ಮತ್ತು ಉಲ್ಲಾಸಕರ ವಾತಾವರಣವನ್ನು ನೀಡುತ್ತದೆ; ಆದಾಗ್ಯೂ, ಈ ಅವಧಿಯಲ್ಲಿ ಜನಸಂದಣಿ ಹೆಚ್ಚಿರಬಹುದು ಮತ್ತು ನದಿಯ ಬಳಿ ಸುರಕ್ಷತೆಗೆ ಆದ್ಯತೆ ನೀಡುವುದು ಮುಖ್ಯವಾಗಿದೆ ಎಂದು ತಿಳಿದಿರಲಿ.ಪರಿಗಣಿಸಬೇಕಾದ ಪ್ರಮುಖ ಅಂಶಗಳು:
ಹವಾಮಾನ: ಮಾನ್ಸೂನ್ ಹಸಿರಿನೊಂದಿಗೆ ಆಹ್ಲಾದಕರ ವಾತಾವರಣವನ್ನು ತರುತ್ತದೆ, ದೇವಾಲಯದ ಭೇಟಿಯನ್ನು ಹೆಚ್ಚು ಆನಂದದಾಯಕವಾಗಿಸುತ್ತದೆ.
ಜನಸಂದಣಿ: ವಾರಾಂತ್ಯಕ್ಕಿಂತ ವಾರದ ದಿನಗಳಲ್ಲಿ ಸಾಮಾನ್ಯವಾಗಿ ಕಡಿಮೆ ಜನಸಂದಣಿ ಇರುತ್ತದೆ.
ನದಿಯ ಪರಿಸ್ಥಿತಿಗಳು: ಮಾನ್ಸೂನ್ ಸಮಯದಲ್ಲಿ ನದಿಯು ಅತ್ಯುತ್ತಮವಾಗಿರುವಾಗ, ನೀರಿನ ಪ್ರವಾಹಗಳು ಮತ್ತು ಸಂಭಾವ್ಯ ಅಪಾಯಗಳ ಬಗ್ಗೆ ಜಾಗರೂಕರಾಗಿರಿ.
Location
Label List
Arakalagudu
(3)
Arasikere
(9)
Attigundi
(1)
Bangalore Police catch the thieves
(1)
Bangalore Robbery Case
(1)
Bank FD
(1)
Belur
(4)
Benefits of Baje
(1)
Benefits of walk after dinner
(1)
Best Food To Increase Hemoglobin Level
(1)
Bhagamandala
(1)
Bindiga
(1)
Bird Flu Symtoms
(1)
Budget friendly International places for Indians
(1)
Chamarajanagar
(5)
Channarayapatna
(1)
Chikmangalore
(16)
China Develops Longevity Pill
(1)
Coorg
(15)
Dakshina kannada
(1)
Devil kannada film
(1)
Drumstick Price Hike
(1)
Fake Nandini ghee sales network detected
(1)
Fake ORS Banned
(1)
Gundlupete
(2)
Hanuma Jayanthi
(1)
Hanur
(1)
Hassan
(27)
Hirekolale
(1)
Holenarasipura
(2)
Horror
(1)
Hosanagara
(2)
How to check the purity of ghee at home
(1)
How To Turn White Hair To Grey Hair Naturally
(1)
Jio New Offer
(1)
Jobs
(1)
K.R.Pete
(3)
Kadaba
(1)
Kadur
(1)
Kalasa
(2)
Keralians hair secret
(1)
kesavinamane
(1)
Kollegala
(1)
Koratagere
(1)
Krishnarajapete
(3)
Kushalnagar
(4)
Madikeri
(6)
Malavalli
(1)
Manchetevaru
(1)
Mandya
(27)
Medicine for diseases
(1)
Milk
(1)
Mysore
(21)
Nagamangala
(1)
Nagarahole
(1)
Nagenahalli
(2)
Nail Biting habit
(1)
National pollution control day
(1)
New Caller ID CNAP
(1)
Pandaravalli
(1)
Pandavapura
(9)
Periyapatna
(1)
Petrol Bunk fraud
(1)
PMJAY Scheme
(1)
Sabarimala Ayyappa Temple Crowd
(1)
Sagara
(9)
Sakaleshpura
(3)
Sanchar Saathi App
(1)
Shivamogga
(21)
Shringeri
(1)
Sira
(1)
Somwarpete
(2)
Soraba
(1)
Srirangapatna
(8)
Talakaveri
(1)
Tarikere
(4)
Temple visit
(1)
Thailand offer free domestic flights
(1)
Tips for healthy life style
(1)
Tips for winter season
(1)
Tirthahalli
(6)
Tumkur
(8)
Turuvekere
(2)
Udupi
(1)
Vehicle fitness fees
(1)
volcanic eruption after 12000 years
(1)
Vykunta ekadashi
(1)
Weak password
(1)
Yelandur
(1)

Post a Comment
Post a Comment